ಜಂಬದ ಕೋಳಿ

ಕವಿತೆಯ ಕಟ್ಟುವ ಜಂಬದ ಕೋಳೀ!
ಬಾ ಬಾ ಎನ್ನುತ ಕೂಗಿದನು
ಅವನೇ ನನ್ನನ್ನು ಕರೆದವೆನೆನ್ನುತ
ಜವದೊಳು ದನಿಹಿಡಿದೋಡಿದೆನು

ಏನಿದು ನಿನ್ನೀ ಆರ್ಭಟವೆನ್ನುತ
ನಸುನಗೆಯಿಂದಲಿ ಕೇಳಿದನು
ನಾನೇನುತ್ತರ ಕೊಡದಿರೆ ಮರುಕದಿ
ಗಡುವನು ನಿಯಮಿಸಿ ಕಳುಹಿದನು

ಗಡುವಿಗೆ ಉತ್ತರ ಕೊಡುವೆನು ಎನ್ನುತ
ಸಡಗರದಿಂದಲಿ ಸಾಗಿದೆನು
ಒಡೆಯಾ, ನಿನ್ನನು ತಿಳಿಯಲೆ ನನ್ನೀ
ಕವಿತೆಗಳೆನ್ನುತ ಓಡಿದೆನು

ನಿನ್ನನು ತಿಳಿಯದ ಘನ ಪಂಡಿತಳೆ
ನನ್ನನು ತಿಳಿಯಲು ಹೊರಟಿಹೆಯಾ?
ನಿನ್ನನು ತಿಳಿದರೆ ನನ್ನನು ತಿಳಿಯುವೆ
ನಡೆ ನೆಡೆ ಎನ್ನುತ ಕಳುಹಿದನು

ಥಟ್ಟನೆ ನನ್ನನು ತಿಳಿಯುವೆನೆನ್ನುತ
ದೃಷ್ಟಿಯ ಮರಳಿಸಿ ನೋಡಿದೆನು
ಸೃಷ್ಟಿಯೆ ತಲೆಕೆಳಗಾಯಿತು ಆಕ್ಷಣ
ಅಬ್ಬಾ ಎನ್ನುತ ನಡುಗಿದೆನು

ಕಾಣದು ಛೀ ಛೀ ಇದು ಹೊಸದಾರಿ
ನಾನಿದನೊಲ್ಲೆನು ಎಡವಿದೆನು
ಹೂವನು ಮುಡಿಯಲು ಬೇರುಗಳೇತಕೆ?
ಬಿಡು ಬಿಡು ಎನ್ನುತ ಕೊಡವಿದೆನು

ಬೇರಿನೊಳಲ್ಲವೆ ಸಾರದ ಸವಿಯು?
ಭುಜಿಸುವುದೇನನು ಎಲೆ ಮರುಳೇ!
ದಾರಿಯನರಿಯದೆ ನಡೆದರೆ ಫಲವೆ?
ಜನಕಜೆ ಎನ್ನುತ ಕೂಗಿದನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯ ಜಯ ಜಯ ಕನ್ನಡ ರಾಜೇಶ್ವರಿ
Next post ಮೋಡ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys